ಹುಚ್ಚುಡುಗ್ರು ಈ ವಾರ ತೆರೆಗೆ
Posted date: 03 Thu, Apr 2014 – 09:57:20 AM

ಮೊನ್ನೆಯಷ್ಟೇ ಸೆನ್ಸಾರ್ ಬಳಿಯಿಂದ ಯು ಸರ್ಟಿಫಿಕೇಟ್ ಪಡೆದ ಕನ್ನಡ ಸಿನೆಮಾ ಹುಚ್ಚುಡುಗ್ರು ಫುಲ್ ಊಟ ಬೀದಿ ಬೆಂಕಿಪಟ್ನಾ... ಈ ವಾರ ರಜತ ಪರದೆಯ ಮೇಲೆ ರಾರಾಜಿಸಲಿದೆ.

ಭಗವತಿ ಪಿಚ್ಚೆರ್ಸ್ಚಿತ್ರದಲ್ಲಿ ನಾಲ್ಕು ನಾಯಕರುಗಳ ಒಳಗೊಂಡ ಸಿನೆಮಾ ವೇದಮೂರ್ತಿ ಹಾಗೂ ರೋಹಿಣಿ ಅವರು ಈ ಚಿತ್ರದ ನಿರ್ಮಾಪಕರುಗಳು. ರೇಡಿಯೊ ಜಾಕೀ ಆರ್ ವಿ ಪ್ರದೀಪ್ ಈ ಹುಚ್ಚುಡುಗ್ರುಮೂಲಕ ನಿರ್ದೇಶನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಯಂಗ್ ಹುಡುಗರು ಯಂಗ್ ಯೆಂಗೋ ಆಡುವುದು ಈ ಚಿತ್ರದ ತಮಾಷೆ ವಿಚಾರ.

ನಿರ್ದೇಶಕ ಪ್ರೇಮ್ ಅವರ ಬಳಿ ಕರಿಯ ಸಿನೆಮದಿಂದ ರಾಜ್ ದಿ ಶೋಮನ್ವರೆಗೆ ಸಹಾಯಕರಾಗಿ ದುಡಿದ ರಘು ಹಾಸನ್ ಅವರು ಚಿತ್ರದ ಕಥೆ, ಚಿತ್ರಕಥೆ, ನಿರ್ಮಾಣದ  ಜವಾಬ್ದಾರಿ ಹೊತ್ತಿದ್ದಾರೆ.

ಗೀತೆಗಳ ಸಾಹಿತ್ಯ ಆನಂದಪ್ರಿಯ, ಕಲ್ಯಾಣ್ ಹಾಗೂ ಸುದರ್ಶನ್ ಅವರು ನೀಡಿದ್ದಾರೆ. ಸಂಭಾಷಣೆಯನ್ನು ಸುದರ್ಶನ್, ಛಾಯಾಗ್ರಹಣ ಶಮನ್ ಮಿತೃ ಅವರು ಚಿತ್ರಕ್ಕೆ ಒದಗಿಸಿದ್ದಾರೆ. ಸಂಗೀತ ನಿರ್ದೇಶಕ ಜೋಷುವ ಶ್ರೀಧರ್ ಅವರು.ಜಾನಿ ಹರ್ಷ ಅವರ ಸಂಕಲನ, ಡಿಫರೆಂಟ್ ಡ್ಯಾನಿ ಅವರ ಸಾಹಸ,

ಚಿತ್ರದ ತಾರಾಗಣದಲ್ಲಿ ಚೇತನ್ ಚಂದ್ರ, ಅಮಿತ್, ಪ್ರತಾಪ್, ದೇವ ನಾಲ್ಕು ಹುಚ್ಚು ಹುಡುಗ್ರು’.  ಅದಿತಿ ರಾವು ನಾಯಕಿ, ರವಿಶಂಕರ್ ಚಿತ್ರದ ಖಳ ನಟ.  

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed